ಗುಡಿಸಲ ಗೋರಿಯಿಂದ

ಒಪ್ಪೊತ್ತಿನ ಊಟದಲ್ಲಿ
ಹರಕು ಬಟ್ಟೆ ಬೆಳಕಿನಲ್ಲಿ
ಅಳುವಿನಲ್ಲಿ ನಗುತ ನಾನು
ಸೆಳವಿನಲ್ಲಿ ತೇಲುತ-
ನೆಲವ ನೆಚ್ಚಿ ಇದ್ದೆನು
ಬೆವರಿನಲ್ಲಿ ಬಾಳುತ
ಒಡಲ ಸುಖ, ಪ್ರೀತಿ ಮಾತು
ಬರುವುದೆಂದು ಕಾಯುತ.

ಮಹಲಿನಿಂದ ಕುರ್ಚಿಯಿಂದ
ಭೂಮಿಯೊಡಲ ಬಿರುಕಿನಿಂದ
ಎದ್ದವಲ್ಲೊ ಎದ್ದವು
ಉರಿಗಣ್ಣಿನ ಕೈಗಳು!
ಹರಿಹಾಯುವ ಮೈಗಳು!

ಮುಚ್ಚಿದಂಥ ಸೆರಗ ಸೆಳೆದು
ಬಡ್ಡಿ ಲೆಕ್ಕ ಹಾಕಿ ಹರಿದು
ಅಸಲಿಗೆಂದು ಆಮರಿದರು
ಎದೆಯ ಮೇಲೆ ಹುಲಿಯ ಉಗುರು.

ನೆಲಕೆ ಬಿದ್ದರಲ್ಲೆ ಒದ್ದು
ಹೊರಳು ಮೈಯ ಮೇಲೆ ಬಿದ್ದು
ಪರಪರನೆ ಹರಿದರೊ
ಮೈಯ ಮಾನದಂಗುಲ!
ಬರೆದರಯ್ಯೊ! ಬರೆದರೊ
ಮಾನಭಂಗದಕ್ಷರ.

ಹಕ್ಕಿ ರೆಕ್ಕೆ ಬಡಿಯುವಾಗ
ಹದ್ದು ಮೀರಿ ಹಲ್ಲೆಯಾಯ್ತು
ಹಸಿವು ಹಗಲು ಒಂದೇ ಆಯ್ತು
ಸೂರ್‍ಯನೆದುರು ಬೆತ್ತಲೆ
ಆದರೂನು ಕತ್ತಲೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳನ್ನು ಆಡಲು ಬಿಡಿ
Next post ನನಗೂ ಸ್ವಲ್ಪ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys